ಸುಂಟಿಕೊಪ್ಪ: ಆಟೊಗೆ ಬೆಂಕಿ ಹಚ್ಚಿ ಪರಾರಿಯಾದ ದುಷ್ಕರ್ಮಿಗಳು
ಸುಂಟಿಕೊಪ್ಪ, ನ11: ಮನೆಯ ಮುಂಭಾದಲ್ಲಿ ನಿಲ್ಲಿಸಿದ್ದ ಆಟೊ ಒಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಸುಟ್ಟು ಕರಕಲಾದ ಘಟನೆ ಮಧುರಮ್ಮ ಬಡಾವಣೆಯ ಮಾದಾಪುರ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಇಲ್ಲಿನ ಆಟೊ ಚಾಲಕ ಶಿವರಾಮ ಆಲಿಯಾಸ ಶಿವಮಣಿ ಎಂಬವರ ಆಟೊ ಎಂದು ತಿಳಿದು ಬಂದಿದೆ. ಇದೇ ರಸ್ತೆ ಬದಿಯಲ್ಲಿ ಪ್ರಕಾಸ್(ಅನಿ) ಎಂಬಾತನ ಆಟೊಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಆದರೆ ಆರೋಪಿಗಳ ಬಂಧನ ಇದುವರೆಗೆ ಆಗಿಲ್ಲ ಎಂದು ಈ ಸಂದರ್ಭ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಪ್ರಭಾರ ಪಿಎಸ್ಸೈ ನವಿನ್ ಗೌಡ ತಿಳಿಸಿದ್ದಾರೆ.
Next Story