ಬೆಂಗಳೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು
ಬೆಂಗಳೂರು,ನ.15: ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ದಾಸರಹಳ್ಳಿ ಚಿಕ್ಕಬಾಣವರದ ಹೆಸರಘಟ್ಟ ಮುಖ್ಯ ರಸ್ತೆಯ ಬೋನ್ ಮಿಲ್ ಪವರ್ ಸ್ಟೇಷನ್ ಬಳಿ ನಡೆದಿದೆ.
ಸೀಡೆದಹಳ್ಳಿಯ ಮುಖ್ಯ ರಸ್ತೆಯ ವಿಶ್ವವಶ್ವಪುರ ಗ್ರಾಮದ ದಾಸರಹಳ್ಳಿಯ ಕಾಂಗ್ರೆಸ್ ಮುಖಂಡ ದಿನೇಶ್ (30) ಮೃತ ಸವಾರ.
ದಾಸರಹಳ್ಳಿಯಿಂದ ಬೋನ್ ಮಿಲ್ ಬಳಿಯಲ್ಲಿರುವ ವಿಶ್ವೇಶ್ವರಪುರದ ತನ್ನ ಮನೆಗೆ ತೆರಳುವಾಗ ಘಟನೆ ನಡೆದಿದ್ದು, ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story