ಹನೂರು ಪೋಲಿಸ್ ಠಾಣೆಗೆ ಭೇಟಿ ನೀಡಿದ ಮೈಸೂರು ದಕ್ಷಿಣ ವಲಯ ಐಜಿಪಿ
ಹನೂರು,ನ.18: ಮೈಸೂರು ದಕ್ಷಿಣ ವಲಯದ ಐಜಿಪಿ ಶ್ರೀ ಶರತ್ ಚಂದ್ರರವರು ಇಂದು ತಾಲೂಕಿನ ಹನೂರು ಪೋಲಿಸ್ ಠಾಣೆಗೆ ಬೇಟಿ ನೀಡಿದರು.
ಬಳಿಕ ಹನೂರು ಠಾಣಾ ವ್ಯಾಪ್ತಿಯಲ್ಲಿ ಇದುವರೆಗೂ ದಾಖಲಾಗಿರುವ ಪ್ರಕರಣಗಳ ಕಡತಗಳನ್ನು ಖುದ್ದಾಗಿ ಪರಿಶೀಲಿಸಿದರು. ನ್ಯಾಯಾಲಯದ ವಿಲೇವಾರಿ ಸಮನ್ಸ್, ವಾರೆಂಟ್, ಕಾಣೆಯಾದ ಪ್ರಕರಣಗಳ ವಿಚಾರಣೆ ಮಾಡಿರುವುದರ ಸಂಬಂಧ ಚರ್ಚಿಸಿ ವಿವರಣೆ ಪಡೆದರು. ನಂತರ ಮಾತನಾಡಿದ ಅವರು, ಹನೂರು ಪೋಲಿಸ್ ಠಾಣಾ ಅಧಿಕಾರಿ ವರ್ಗ ಮತ್ತು ಸಿಬ್ಬಂಧಿ ವರ್ಗದವರ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಂದಿನ ದಿನಗಳಲ್ಲೂ ಸಹ ಉತ್ತಮ ಕಾರ್ಯವನ್ನು ನಿರ್ವಹಿಸುವುದರ ಜೊತೆಗೆ ಪೊಲೀಸ್ ಠಾಣೆಯೆಂದರೆ ಹೆದರಿ ದೂರ ಓಡುವ ಸಾರ್ವಜನಿಕರಿಗೆ ಜನಸ್ನೇಹಿ ಠಾಣೆಯನ್ನಾಗಿ ಮಾಡಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಹೆಚ್ಚುವರಿ ಅಧೀಕ್ಷಕ ಶ್ರೀಮತಿ ಗೀತಾ ಪ್ರಸನ್ನಕುಮಾರ್, ಡಿವೈಸ್ಪಿ ಪುಟ್ಟಮಾದ್ದಯ್ಯ, ಹನೂರು ಪಿಐ ಮೋಹಿತ್ಸಹದೇವ್, ಸಬ್ ಇನ್ಸ್ಪೆಕ್ಟರ್ ನಾಗೇಶ್ ಸೇರಿದಂತೆ ಠಾಣಾ ಸಿಬ್ಬಂದಿಗಳು ಹಾಜರಿದ್ದರು.