ಮಂಡ್ಯ: ಸಹಾಯಕ ಇಂಜಿಯರ್ನಿಂದ ಅಂಗನವಾಡಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ
ಮಂಡ್ಯ, ಎ.8: ಹೇಮಾವತಿ ಜಲಾಶಯ ಯೋಜನೆಯ ಸಹಾಯಕ ಇಂಜಿನಿಯರ್(ಎಇ) ಅಂಗನವಾಡಿಯ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಆಕೆಯನ್ನು ಗೃಹಬಂಧನದಲ್ಲಿ ಇರಿಸಿರುವ ಘಟನೆ ಇಲ್ಲಿನ ಕೆಆರ್ ಪೇಟೆಯಲ್ಲಿ ನಡೆದಿದೆ.
ಆರೋಪಿ ದೊರೆ ಸ್ವಾಮಿ ವಿವಾಹಿತೆ ಅಂಗನವಾಡಿ ಕಾರ್ಯಕರ್ತೆಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆತನಿಗೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ತನ್ನ ಕ್ವಾರ್ಟರ್ಸ್ನಲ್ಲಿ ಗೃಹಬಂಧನದಲ್ಲಿಟ್ಟು ದರ್ಪ ತೋರಿದ್ದಾನೆ.
ವಿಷಯ ತಿಳಿದ ಕೆಆರ್ ಪೇಟೆ ಪೊಲೀಸರು ಮಹಿಳೆಯನ್ನು ಗೃಹ ಬಂಧನದಿಂದ ಮುಕ್ತಗೊಳಿಸಿದ್ದು, ಆರೋಪಿ ಇಂಜಿನಿಯರ್ ತಲೆ ಮರೆಸಿಕೊಂಡಿದ್ದಾನೆ.
Next Story