ಸಾಲಬಾಧೆ : ರೈತ ಆತ್ಮಹತ್ಯೆ
ದಾವಣಗೆರೆ,ಡಿ.3: ಸಾಲಬಾಧೆಯಿಂದ ಬೇಸತ್ತು ನೇಣು ಹಾಕಿಕೊಂಡು ರೈತ ಆತ್ಮಹತ್ಯೆಗೈದ ಘಟನೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ನಡೆದಿದೆ.
ಹೆಚ್.ಜಿ. ಸೋಮಶೇಖರ್ (42) ಸಾವನ್ನಪ್ಪಿದ ರೈತ. ಸಾಲಗಾರರ ಹಾಗೂ ಬ್ಯಾಂಕ್ ನವರ ವರ್ತನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈತ ತನ್ನ 6 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಆದರೆ ಭತ್ತ ಹುಳುಬಾಧೆಯಿಂದ ನಾಶವಾಗಿದ್ದು, ಬೆಳೆದಿದ್ದ ಬೆಳೆಯೆಲ್ಲಾ ಹಾನಿಯಾಗಿದೆ. ಅದಲ್ಲದೆ ವಿವಿಧೆಡೆ 20 ಲಕ್ಷ ರು. ಸಾಲ ಮಾಡಿದ್ದರು ಎನ್ನಲಾಗಿದೆ.
Next Story