ಕೇಂದ್ರದ ಸಾಲ ಮನ್ನಾ ಚಿಂತನೆ ಲೋಕಸಭಾ ಚುನಾವಣೆಯ ತಂತ್ರ: ರಿಝ್ವಾನ್ ಹರ್ಷದ್
ಬೆಳಗಾವಿ, ಡಿ.13: ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಚಿಂತನೆ ನಡೆಸಿರುವುದು ಚುನಾವಣಾ ತಂತ್ರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ರಿಝ್ವಾನ್ ಹರ್ಷದ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಆಗ ಸಾಲ ಮನ್ನಾ ಮಾಡಬೇಕೆಂಬ ಚಿಂತನೆ ಪ್ರಧಾನಿ ಮೋದಿ ಅವರಿಗೆ ಬರಲಿಲ್ಲವೆ ಎಂದು ಪ್ರಶ್ನಿಸಿದರು.
ಇದೀಗ ಪಂಚರಾಜ್ಯಗಳ ಫಲಿತಾಂಶ ಬಂದಿದೆ. ಈಗ ಜ್ಞಾನೋದಯವಾಗಿ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮುಂದಿನ ಲೋಕಸಭೆ ಚುನಾವಣೆಯ ತಂತ್ರವಾಗಿದೆ ಎಂದರು.
ಕೇಂದ್ರದ ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗಿಂತ ವಿಮಾ ಕಂಪೆನಿಯವರಿಗೆ ಪ್ರಧಾನಿ ಮೋದಿ ಅವರು ಲಾಭ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
Next Story