ಜಮೀನಿಗೆ ಔಷಧಿ ಸಿಂಪಡಿಸುವ ವೇಳೆ ಅಸ್ವಸ್ಥರಾಗಿ ಮಹಿಳೆ ಸಾವು
ಕೊಳ್ಳೇಗಾಲ,ಡಿ.21: ಜಮೀನಿಗೆ ಔಷಧಿ ಸಿಂಪಡಿಸುವಾಗ ಅಸ್ವಸ್ಥಗೊಂಡ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಸಣ್ಣಮ್ಮ(68) ಮೃತ ಮಹಿಳೆ. ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿನ ಬೆಳೆಯಲ್ಲಿದ್ದ ಹುಳಗಳನ್ನು ಹೋಗಲಾಡಿಸಲು ಔಷದಿ ಸಿಂಪಡಿಸುವ ಸಂದರ್ಭ ಅದರ ವಾಸನೆಗೆ ಸಣ್ಣಮ್ಮ ತೀವ್ರ ಅಸ್ವಸ್ಥಗೊಂಡರು. ಕೂಡಲೇ ಮಗ ಚಂದ್ರಶೇಕರ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರಕರಣ ಸಂಬಧ ಗ್ರಾಮಾಂತರ ಪೊಲೀಸ್ ಠಾಣೆಗೆ ಮೃತ ಮಹಿಳೆಯ ಮಗ ಕುಮಾರ್ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story