ಕೊಪ್ಪ: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಶ್ರದ್ಧಾಂಜಲಿ ಸಭೆ
ಕೊಪ್ಪ, ಜ.2: ತಾಲೂಕಿನ ಜಯಪುರದ ಸ್ವಾಗತ್ ಆಟೊ ನಿಲ್ದಾಣದಲ್ಲಿ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಯವರ ಶ್ರದ್ದಾಂಜಲಿ ಸಭೆ ನಡೆಯಿತು.
ಪತ್ರಕರ್ತ ಮಣಿಕಂಠ ಕಂದಸ್ವಾಮಿ ಮಾತನಾಡಿ, ರಾಜ್ಯಕ್ಕೆ ಮಾದರಿ ಮತ್ತು ಅತ್ಯಂತ ಜನ ಪರ ಕಾಳಜಿಯುಳ್ಳ ಮಾನವತಾವಾದಿ ಅಧಿಕಾರಿಯಾಗಿದ್ದು, ಜನ ಮಾನವರಲ್ಲಿ ಅವರ ಜನಪರ ಕೆಲಸದ ಮೂಲಕ ಅಮರರಾಗಿದ್ದಾರೆ. ಇಲಾಖೆಯ ಅಧಿಕಾರಿಗಳಿಗೆ ಮಾದರಿಯಾಗಿ ತಮ್ಮ ದಕ್ಷತೆಯನ್ನು ತೋರಿದ ಅಧಿಕಾರಿ ಮಧುಕರ್ ಶೆಟ್ಟಿ ನಿಧನದಿಂದ ರಾಜ್ಯಕ್ಕೆ ತುಂಬಾಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತ ಪ್ರದೀಪ್ಹೆಬ್ಬಾರ್, ಸುಧಾಕರ, ಶ್ರೀಕರ, ಮಂಜು(ಅಣ್ಣು) ಉಪಸ್ಥಿತರಿದ್ದರು.
Next Story