ಸಾಲದ ಹೊರೆಯಿಂದ ಕಂಗಾಲಾದ ರೈತ ಆತ್ಮಹತ್ಯೆ
ಹಾಸನ, ಜ. 10: ಬೆಳೆದ ಬೆಳೆ ಕೈಕೊಟ್ಟಿದ್ದರಿಂದ ಮಾಡಿದ ಸಾಲ ತೀರಿಸಲಾಗದೇ ಹೆದರಿದ ರಂಗೇಗೌಡ ಎಂಬುವರೇ ವಿಷ ಸೇವನೆ ಮಾಡಿದ ಘಟನೆ ತಾಲೂಕಿನ ಶಾಂತಿಗ್ರಾಮ ಹೋಬಳಿ ಬೆಳ್ಳಿಕೊಪ್ಪಲುನಲ್ಲಿ ಬುಧವಾರ ಸಂಜೆ ನಡೆದಿದೆ.
ತಮ್ಮ ಜಮೀನಿನಲ್ಲಿ ಬೆಳೆದ ಜೋಳೆ ಇತರೆ ಬೆಳೆ ಕೈಕೊಟ್ಟಿದ್ದರಿಂದ ವಿಷ ಕುಡಿದು ಸಾವನಪ್ಪಿದ್ದಾರೆ. ಇತನು ಹಾಸನದ ಎಡಿಬಿ ಬ್ಯಾಂಕಿನಿಂದ 1 ಲಕ್ಷ ರೂ, ಗ್ರಾಮಶಕ್ತಿ ಕೇಂದ್ರದಿಂದ 3 ಲಕ್ಷ ರೂ, ಕೈಸಾಲ 3 ಲಕ್ಷ ರೂಗಳನ್ನು ಸಾಲ ಮಾಡಿದ್ದರು ಎಂದು ಹೇಳಲಾಗಿದೆ.
Next Story