ಲಾರಿ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು
ಹನೂರು,ಜ.11: ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಓರ್ವ ಮೃತಪಟ್ಟು, ಮತ್ತೊರ್ವ ಗಂಭೀರವಾಗಿರುವ ಘಟನೆ ತಾಲೂಕಿನ ರಾಮಾಪುರದಿಂದ ಮಾರ್ಟಳ್ಳಿ ಸಂಪರ್ಕ ಕಲ್ಪಿಸುವ ಮಾರ್ಗಮದ್ಯೆ ನಡೆದಿದೆ.
ಪೆದ್ದನ್ನಪಾಳ್ಯದ ನಿವಾಸಿ ಮುನೀಯಾ (40) ಮೃತ ವ್ಯಕ್ತಿ. ಮುತ್ತು (42) ಎಂಬವರಿಗೆ ಗಂಭೀರ ಗಾಯಗಳಾಗಿದೆ ಎಂದು ಗುರುತಿಸಲಾಗಿದೆ
ಶುಕ್ರವಾರ ಸಂಜೆ ಕೆಲಸ ನಿಮಿತ್ತ ರಾಮಾಪುರ ಗ್ರಾಮಕ್ಕೆ ಆಗಮಿಸಿದ್ದ ಪೆದ್ದನಪಾಳ್ಯದ ನಿವಾಸಿಗಳಾದ ಮುನೀಯಾ ಹಾಗೂ ಮುತ್ತು ಎಂಬವರು ತಮ್ಮ ಸ್ವಗ್ರಾಮದತ್ತ ಹಿಂದಿರುಗುವಾಗ ಈ ಘಟನೆ ನಡೆದಿದೆ.
ಗಂಭೀರ ಗಾಯಗಳಾದ ಮುತ್ತುವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ರಾಮಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
Next Story