ಹೈಕಮಾಂಡ್ ಅಣತಿಗಾಗಿ ಕಾಯುತ್ತಿರುವ ಬಿಎಸ್ ವೈ
ಹೊಸದಿಲ್ಲಿ, ಜ.14: ರಾಜ್ಯದಲ್ಲಿ ಕಾಂಗ್ರೆಸ್ –ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಕೈಗೊಂಡಿರುವ ಪ್ರಯತ್ನ ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು, ಇಂದು ಮಧ್ಯಾಹ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚಿಸುವ ಸಾಧ್ಯತೆ ಇದೆ.
ದಿಲ್ಲಿಯಲ್ಲಿರುವ ಬಿಎಸ್ ವೈ ಅವರು ಹೈಕಮಾಂಡ್ ನ ಅಣತಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಮಿತ್ ಶಾ ಮತ್ತು ಬಿಎಸ್ ವೈ ಭೇಟಿ ಬಳಿಕ ಬಿಜೆಪಿಯ ಆಪರೇಷನ್ ಕಮಲಕ್ಕೆ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ದಿಲ್ಲಿಯಲ್ಲಿ ಬೀಡುಬಿಟ್ಟಿರುವ ಬಿಜೆಪಿಯ ಶಾಸಕರು ಸಂಜೆಯೊಳಗಾಗಿ ಮುಂಬೈಗೆ ಶಿಫ್ಟ್ ಆಗಲಿದ್ದಾರೆ . ಮುಂಬೈ ಬಿಜೆಪಿಯ ಆಪರೇಶನ್ ಥಿಯೇಟರ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
Next Story