ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ: ಕುಣಿದು ಕುಪ್ಪಳಿಸಿದ ಯುವ ಸಮೂಹ
ಕೊಡಗು ಪ್ರವಾಸಿ ಉತ್ಸವ
ಮಡಿಕೇರಿ, ಜ.14 : ಕೊಡಗು ಪ್ರವಾಸಿ ಉತ್ಸವದ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದ ಸಂಗೀತ ರಸ ಸಂಜೆ ಕಾರ್ಯಕ್ರಮ ಮಂಜಿನ ನಗರಿಯಲ್ಲಿ ಹೊಸ ಹವಾ ಸೃಷ್ಟಿಸಿತು.
ಗಾಂಧಿ ಮೈದಾನ, ಮೈದಾನದ ಪಕ್ಕದ ಗುಡ್ಡ, ರಾಜಾಸೀಟು ರಸ್ತೆ ತುಂಬಾ ಜನಜಂಗುಳಿ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿದ್ದ ಯುವ ಸಮೂಹ ಅಬ್ಬರದ ಸಂಗೀತಕ್ಕೆ ಕುಣಿದು ಕುಪ್ಪಳಿಸಿತು. ವರ್ಣರಂಜಿತ ವೇದಿಕೆಯ ಮೆರುಗು ಕಾರ್ಯಕ್ರಮದ ಆಕರ್ಷಣೆಯನ್ನು ಹೆಚ್ಚಿಸಿತ್ತು. ಮಹಾಮಳೆಯ ಅನಾಹುತದಿಂದ ದಸಾರದಲ್ಲಿ ಕಳೆದುಕೊಂಡ ಮನೋರಂಜನೆಯ ಮಜಾವನ್ನು ಜನ ಕೊಡಗು ಉತ್ಸವದಲ್ಲಿ ಅನುಭವಿಸಿದರು. ಅರ್ಜುನ್ ಜನ್ಯ ಅವರಿಗೆ ಸಾಥ್ ನೀಡಿದ ವ್ಯಾಸರಾಜ್, ಅನುರಾಧ ಭಟ್, ಇಂದು ನಾಗರಾಜ್, ಲಕ್ಷ್ಮೀ ನಾಗರಾಜ್, ಸಂಜಿತ್ ಹೆಗ್ಡೆ, ಶ್ರೀನಿವಾಸ್ ಸಾವಿರಾರು ಜನರ ಹೃದಯ ಗೆದ್ದರು.
ಅರೆಭಾಷೆ ಅಕಾಡೆಮಿ ವತಿಯಿಂದ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡ ಗಮನ ಸೆಳೆದವು.
Next Story