ಮೈತ್ರಿ ಸರಕಾರದ ಸ್ಥಿತಿ ಡೈವೋರ್ಸ್ ಹಂತಕ್ಕೆ ತಲುಪಿದೆ: ಡಿ.ವಿ.ಸದಾನಂದಗೌಡ
ಬೆಂಗಳೂರು, ಜ.15: 37 ಸ್ಥಾನ ಬಂದವರು ಅಧಿಕಾರ ಮಾಡುವಾಗ 104 ಸ್ಥಾನ ಬಂದಿರುವ ನಾವು ಅಧಿಕಾರ ಮಾಡಬಾರದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರಶ್ನಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಶಾಸಕರನ್ನು ಸೆಳೆಯುತ್ತಿಲ್ಲ, ಹಾಗೆ ಹೇಳುವುದು ಸರಿಯಲ್ಲ. ರಾಜ್ಯದಲ್ಲಿ ಮೈತ್ರಿ ಸರಕಾರದ ಸ್ಥಿತಿ ಡೈವೋರ್ಸ್ ಹಂತಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ ರಾಜಕೀಯ ರಾದ್ಧಾಂತ ನಡೆಯುತ್ತಿದೆ. ನಮಗೂ ಬದಲಾವಣೆ ಮಾಡುವ ಜವಾಬ್ಧಾರಿ ಇದೆ ಎಂದರು.
ನಮ್ಮ ಶಾಸಕರು ಹೊಸದಿಲ್ಲಿಗೆ ರಾಷ್ಟ್ರೀಯ ಪರಿಷತ್ ಸಭೆಗಾಗಿ ತೆರಳಿದ್ದಾರೆ. ಅವರಿಗೆ ಲೋಕಸಭಾ ಚುನವಣೆಗಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
Next Story