ಬಂಡೀಪುರ ಅಭಯಾರಣ್ಯ: ಕಾರು ಢಿಕ್ಕಿ ಹೊಡೆದು ಜಿಂಕೆ ಸಾವು
ಚಾಮರಾಜನಗರ,ಜ.15: ಕಾರು ಢಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಂಡೀಪುರ ಅಭಯಾರಣ್ಯ ದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಘಟನೆ ನಡೆಸಿದ್ದು, ಕನಕಪುರದ ಮಂಜುನಾಥ್ ಎಂಬವರಿಗೆ ಸೇರಿದ ಮಾರುತಿ ಆಲ್ಟೋ ಕಾರು ಢಿಕ್ಕಿಯಾಗಿದೆ. ಬಂಡೀಪುರ ಕಚೇರಿ ಸಮೀಪ ಜಿಂಕೆಯು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಜಿಂಕೆ ಸಾವನ್ನಪ್ಪಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಮಹಜರು ನಡೆಸಿ ಕಾರು ವಶಕ್ಕೆ ಪಡೆದಿದ್ದಾರೆ. ಅರಣ್ಯ ವನ್ಯಜೀವಿ ಕಾಯ್ದೆಯಡಿ ಕೇಸು ದಾಖಲು ಮಾಡಲಾಗಿದೆ.
Next Story