ಮಡಿಕೇರಿ : ಮುಸ್ಲಿಂ ಜಮಾಅತ್ ಉರ್ದು ಪೋಸ್ಟರ್ ಬಿಡುಗಡೆಗೊಳಿಸಿದ ಸಚಿವ ಯು.ಟಿ ಖಾದರ್
ಮಡಿಕೇರಿ, ಜ. 17: ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಹಳೆ ಹಜ್ ಕ್ಯಾಂಪ್ ಮೈದಾನದಲ್ಲಿ ಜ. 27ರಂದು ನೂತನವಾಗಿ ರೂಪುಗೊಳ್ಳುವ ಕರ್ನಾಟಕ ಮುಸ್ಲಿಂ ಜಮಾಅತ್ ನ ಪೋಸ್ಟರನ್ನು ಕೊಡಗು ಸಹಾಯಕ ಖಾಝಿ ಎಡಪ್ಪಾಲ ಉಮರ್ ಮುಸ್ಲಿಯಾರ್ ಕರ್ನಾಟಕ ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ಅವರಿಗೆ ನೀಡುವ ಮೂಲಕ ಮಡಿಕೇರಿ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಮುಸ್ಲಿಂ ಜಮಾಅತ್ ರಾಜ್ಯ ಕೋ ಅರ್ಡಿನೇಟರ್, ಮಾಜಿ ರಾಜ್ಯ ವಕ್ಫ್ ಸದಸ್ಯ ಮೌಲಾನಾ ಶಾಫಿ ಸಅದಿ ಬೆಂಗಳೂರು, ಎಸ್ಸೆಸ್ಸೆಫ್ ರಾಜ್ಯ ಅದ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೊಡಗು ಜಿಲ್ಲಾ ವಕ್ಫ್ ಅಧ್ಯಕ್ಷ ಹಮೀದ್ ಕಡಬಗೆರೆ, ಎಸ್ ವೈ ಎಸ್ ಬೆಂಗಳೂರು ಜಿಲ್ಲಾ ಅಧ್ಯಕ್ಷ ಬಶೀರ್ ಸಅದಿ, ಉಪಾಧ್ಯಕ್ಷ ಇಸ್ಮಾಯಿಲ್ ಸಅದಿ ಕಿನ್ಯ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಅಬ್ದುರ್ರಹ್ಮಾನ್ ಮೊಗರ್ಪಣೆ, ಮುಸ್ಲಿಂ ಜಮಾಅತ್ ಬೆಂಗಳೂರು ಜಿಲ್ಲಾ ಕೋ ಅರ್ಡಿನೇಟರ್ ಹಬೀಬ್ ನಾಳ, ಕೊಡಗು ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಹಫೀಲ್ ಸಅದಿ, ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಯಾಕೂಬ್ ಬಜಪಳ್ಳಿ, ಎಸ್ ವೈ ಎಸ್ ಜಿಲ್ಲಾ ನಾಯಕ ಯೂಸುಫ್ ಹಾಜಿ ಕೊಂಡಂಗೇರಿ, ಮೈಸೂರು ಜಿಲ್ಲಾ ಮುಸ್ಲಿಂ ಜಮಾಅತ್ ಕೋ ಆರ್ಡಿನೇಟರ್ ಇಬ್ರಾಹಿಂ ನಈಮಿ ಮುಂತಾದವರು ಉಪಸ್ಥಿತರಿದ್ದರು.