ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ತುರ್ತು ಸಭೆ
ತುಮಕೂರು, ಜ.21: ಸಿದ್ಧಗಂಗಾ ಮಠದ ಡಾ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರು ಪೇರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರು ಮಠದ ಆಡಳಿತ ಮಂಡಳಿ ಜೊತೆ ಇಂದು ತುರ್ತು ಸಭೆ ನಡೆಸಿದರು.
ಮೈಸೂರಿನಿಂದ ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಸಿಎಂ ಕುಮಾರ ಸ್ವಾಮಿ ಅವರು ಶ್ರೀಗಳ ಆರೋಗ್ಯದ ಬಗ್ಗೆ ಕಿರಿಯ ಶ್ರೀಗಳ ಮೂಲಕ ಮಾಹಿತಿ ಪಡೆದರು. ಬಳಿಕ ಸಭೆ ನಡೆಸಿದರು. ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್, ಸುತ್ತೂರು ಶ್ರೀಗಳು, ಕೇಂದ್ರ ವಲಯ ಐಜಿಪಿ ಸಭೆಯಲ್ಲಿ ಭಾಗವಹಿಸಿದ್ದರು.
Next Story