ಶಿವಕುಮಾರ ಸ್ವಾಮೀಜಿ ನಿಧನ: ಶಾಸಕ ಆರ್.ನರೇಂದ್ರ ರಾಜುಗೌಡ ತೀವ್ರ ಸಂತಾಪ
ಹನೂರು,ಜ.21: ಶ್ರೀ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಶಾಸಕ ಆರ್ ನರೇಂದ್ರ ರಾಜುಗೌಡ ತೀವ್ರ ಸಂತಾಪ ಸೂಚಿಸಿದ್ದಾರೆ.
ಆಧುನಿಕ ಬಸವಣ್ಣ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮಿಗಳು ನಿಧನರಾಗಿದ್ದಾರೆ. ಇದರಿಂದ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಅಗಲಿಕೆಯ ನೋವನ್ನು ದೇಶ ವಿದೇಶದಲ್ಲಿರುವ ಅವರ ಅಪಾರ ಭಕ್ತವೃಂದಕ್ಕೆ ಭರಿಸುವ ಶಕ್ತಿ ನೀಡಲೆಂದು ಹಾಗೂ ಇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಂಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
Next Story