ಸಿದ್ದಗಂಗಾ ಮಠಕ್ಕೆ ತೆರಳಿ ವಾಪಸಾಗುತ್ತಿದ್ದ ಜೀಪ್ ಮರಕ್ಕೆ ಢಿಕ್ಕಿ: ಓರ್ವ ಮೃತ್ಯು
ಚಿಕ್ಕಮಗಳೂರು, ಜ. 22: ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀ ಗಳ ಅಂತಿಮ ದರ್ಶನ ಪಡೆದು ಕಡೂರು ಪಟ್ಟಣಕ್ಕೆ ವಾಪಾಸು ಬರುತಿದ್ದ ಬೊಲೊರೊ ವಾಹನ ಮರಕ್ಕೆ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಕಡೂರು ಸಮೀಪದ ಗೆದ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಡೂರು ಸಮೀಪದ ಮಲ್ಲೇಶ್ವರ ಗ್ರಾಮದ ಪರಮೇಶ್ವರಪ್ಪ(40) ಮೃತರು ಎಂದು ಗುರುತಿಸಲಾಗಿದೆ. ವಾಹನದಲ್ಲಿ ಇದ್ದ ಆರು ಮಂದಿ ಗಾಯಗೊಂಡಿದ್ದು ಅವರನ್ನು ಕಡೂರು ಹಾಗು ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.