ತುಮಕೂರಿನ ಯೋಧ ಎಂ.ಸಾದಿಕ್ ಗೆ ಗಣರಾಜ್ಯೋತ್ಸವ ಶೌರ್ಯ ಪ್ರಶಸ್ತಿ
ತುಮಕೂರು, ಜ. 26: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯಲ್ಲಿರುವ ತುಮಕೂರಿನ ಎಂ. ಸಾದಿಕ್ ಅವರಿಗೆ ಗಣರಾಜ್ಯೋತ್ಸವ ದಲ್ಲಿ ಶೌರ್ಯ ಪ್ರಶಸ್ತಿಗೆ ಲಭಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಮೂವರು ಉಗ್ರರ ಎನ್ ಕೌಂಟರ್ ಮಾಡಿರುವುದಕ್ಕೆ ಸಾದಿಕ್ ಶೌರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಎನ್ಎಸ್ ಜಿ ಪಡೆ, ದಕ್ಷಿಣಾ ಆಫ್ರಿಕಾದ ಸೂಡಾನ್ ಗೆ ತೆರಳಿದ್ದ ವಿಶ್ವಸಂಸ್ಥೆ ಶಾಂತಿ ಸೇನೆಯಲ್ಲೂ ಸಾದಿಕ್ ಅವರಿದ್ದರು.
ತುಮಕೂರಿನ ಪೂರ್ಹೌಸ್ ಕಾಲನಿ ನಿವಾಸಿ ಎಂ. ಸಾದಿಕ್ 2004ರಲ್ಲಿ ಭಾರತೀಯ ಸೇನೆ ಸೇರಿದ್ದು, ಸದ್ಯ ಕಾಶ್ಮೀರದ ಕುಲ್ಗಾಮ್ಲಿ ರಾಷ್ಟ್ರೀಯ ರೈಫಲ್ಸ್ 1ನೇ ಬೆಟಾಲಿಯನ್ ನಲ್ಲಿ ಸೇವೆಯಲ್ಲಿದ್ದಾರೆ.
ಸಾದಿಕ್ ತುರುವೇಕೆರೆ ತಾಲೂಕಿನ ಅಮ್ಮಸಂದ್ರದವರು. ತಂದೆ ದಿ.ಮುಹಮ್ಮದ್ ಸಲೀಂ, ತಾಯಿ ಸಿರಾಜುನ್ನೀಸಾ. 10 ವರ್ಷಗಳ ಹಿಂದೆಯೇ ಕುಟುಂಬ ತುಮಕೂರಿಗೆ ಬಂದು ನೆಲೆಸಿದ್ದಾರೆ.
Next Story