ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ
ಕೊಪ್ಪ, ಜ.28 ತಾಲೂಕಿನ ಕೂಳೂರು ಗ್ರಾಮದ ರೈತ ವೆಂಕಟೇಶ್ (58) ಸಾಲಭಾದೆಗೆ ಬೇಸತ್ತು ವಿಷ ಸೇವಿಸಿ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅಗಳಗಂಡಿ ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ ರೂ 1.5 ಲಕ್ಷ ಸಾಲ ಬಾಕಿ ಹಾಗೂ ಸ್ಥಳೀಯ ಸಹಕಾರಿ ಸಂಘ ಸಂಸ್ಥೆ ಮತ್ತು ಕೈಸಾಲವಾಗಿ ಅಂದಾಜು ರೂ. 2 ಲಕ್ಷ ಸಾಲ ಇದ್ದಿದ್ದರಿಂದ ನಮ್ಮ ತಂದೆ ವಿಷ ಸೇವಿಸಿದ್ದಾರೆ ಎಂದು ಮಗ ಸಂದೇಶ್ ಜಯಪುರ ಆರಕ್ಷಕ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.
Next Story