ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಇಂದು ಮಧ್ಯಾಹ್ನ ಹುಟ್ಟೂರಿಗೆ
ಬೆಂಗಳೂರು, ಫೆ.16: ಪುಲ್ವಾಮದಲ್ಲಿ ಸಿಆರ್ ಪಿಎಫ್ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿಯಂದಾಗಿ ಹುತಾತ್ಮರಾದ ಮಂಡ್ಯದ ಯೋಧ ಎಚ್. ಗುರು ಅವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ ಹುಟ್ಟೂರಿಗೆ ಆಗಮಿಸಲಿದೆ.
ಬೆಳಗ್ಗೆ 11:30ಕ್ಕೆ ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಗುರು ಅವರ ಪಾರ್ಥಿವ ಶರೀರ ಆಗಮಿಸಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಗುರು ಹುಟ್ಟೂರು ಗುಡಿಗೆರೆ ಕಾಲೋನಿಗೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು. ಪಾರ್ಥಿವ ಶರೀರದ ಅಂತ್ಯ ಕ್ರಿಯೆ ನಡೆಸಲು ಅಗತ್ಯದ ತಯಾರಿ ನಡೆಸಲಾಗವುದು.
ಈ ನಡುವೆ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ನಲ್ಲಿ ತರುವಂತೆ ಗುಡಿಗೆರೆ ಕಾಲೋನಿಯಲ್ಲಿ ಗುರು ಸ್ನೇಹಿತರು , ಅಭಿಮಾನಿಗಳು ಒತ್ತಾಯಿಸಿದ್ದಾರೆ. ಗುರು ಭಾವ ಚಿತ್ರ ಹಿಡಿದು ಗುಡಿಗೆರೆಯಲ್ಲಿ ಸ್ಥಳೀಯರು ಮೆರವಣಿಗೆ ನಡೆಸಿದರು.
ಹುತಾತ್ಮ ಯೋಧ ಗುರು ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
Next Story