ಹನೂರು: ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ
ಹನೂರು,ಫೆ.16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಯೋತಾದಕರ ಸ್ಫೋಟಕ ದಾಳಿಯಿಂದ ಹುತಾತ್ಮರಾದ 40 ಕ್ಕೂ ಹೆಚ್ಚು ಮಂದಿ ಸೈನಿಕರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪಟ್ಟಣದ ನೂತನ ಬಸ್ ನಿಲ್ದಾಣ ಬಳಿ ಶನಿವಾರ ರಾತ್ರಿ ಮಡಿವಾಳ ಸಮುದಾಯದ ಮುಖಂಡರು ಶ್ರದ್ದಾಂಜಲಿ ಸಲ್ಲಿಸಿದರು.
ಸಾರ್ವಜನಿಕರೊಡನೆ ಮಂಡ್ಯದ ಯೋಧನ ಭಾವಚಿತ್ರಕ್ಕೆ ಫಲಪುಷ್ಪ ಹಾಕಿ ಸುತ್ತಲೂ ಮೇಣದ ಬತ್ತಿ ಹಚ್ಚಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.
ಈ ವೇಳೆ ಪ.ಪಂ.ಅಧ್ಯಕ್ಷೆ ಮಮತಾಮಹದೇವು, ಮುಖಂಡರಾದ ವಿಜಿ, ಮಹದೇವ ಸೇರಿ ಅನೇಕರು ಉಪಸ್ಥಿತರಿದ್ದರು.
Next Story