ಸಾಗರ: ಅರಣ್ಯಕ್ಕೆ ಬೆಂಕಿ ತಗುಲಿ ಸಾವಿರಾರು ಮರಗಳು ಭಸ್ಮ
ಸಾಗರ, ಫೆ.25: ತಾಲೂಕಿನ ಆವಿನಹಳ್ಳಿ ಹೋಬಳಿಯ ಮೂರಕೈ, ಬಾಳೆಕೊಪ್ಪ, ಸತಾಳು ಹಾಗೂ ಗುಳೆಹಳ್ಳಿ ಭಾಗದಲ್ಲಿ ಅರಣ್ಯಕ್ಕೆ ಬೆಂಕಿ ತಗುಲಿದ್ದು, ಸಾವಿರಾರು ಮರಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ರವಿವಾರ ಮಧ್ಯಾಹ್ನ ಅರಣ್ಯಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ್ದರಿಂದ ಬೆಲೆಬಾಳುವ ಕಾಡುಜಾತಿ ಮರಗಳು ನಾಶವಾಗಿದ್ದು, ಕೆಲವು ಪ್ರಾಣಿಗಳು ಸಹ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದರೆ ಅಗ್ನಿಶಾಮಕ ದಳದ ಕಚೇರಿ ಸಂಖ್ಯೆ 08183-226800 ಕರೆ ಮಾಡಿ, ಅರಣ್ಯ ಸಂರಕ್ಷಣೆಗೆ ಸಹಕಾರ ನೀಡುವಂತೆ ಅಗ್ನಿಶಾಮಕ ಸಿಬ್ಬಂದಿ ರವಿ ಜೆ. ಅವರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಅಬ್ದುಲ್ ರಜಾಕ್, ಜೆ.ರವಿ, ಚೆನ್ನಪ್ಪಎಚ್., ಸತೀಶ್, ಪ್ರಕಾಶ್ ಇದ್ದರು.
Next Story