ಮನೆಯ ಮೇಲ್ಛಾವಣಿಯಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು
ಸುಂಟಿಕೊಪ್ಪ, ಮಾ.4: ಮನೆಯ ಮೇಲ್ಛಾವಣಿ ಕೆಲಸ ನಿರ್ಮಿಸುವ ವೇಳೆ ಆಯತಪ್ಪಿ ಯುವಕನೋರ್ವ ಕೆಳಕ್ಕೆ ಬಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಧುರಮ್ಮ ಬಡಾವಣೆಯ ನಿವಾಸಿ ವಳ್ಳಿ ಎಂಬವರ ಪುತ್ರ ಹರೀಶ್(20) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ. ಕಳೆದ 2 ವಾರಗಳ ಹಿಂದೆ ಕುಶಾಲನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನೇರಿ ಮೇಲ್ಛಾವಣಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ನಿಯಂತ್ರಣ ತಪ್ಪಿಕೆಳಗೆ ಬಿದ್ದಿದ್ದಾನೆ. ಇದರಿಂದ ತಲೆಗೆ ತೀವ್ರವಾಗಿ ಗಾಯಗೊಂಡು ಕೋಮಾಸ್ಥಿತಿಗೆ ತಲುಪಿದ್ದ ಈತನಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಈ ಮದ್ಯೆ ಗಾಯಾಳು ಹರೀಶ್ರನ್ನು ಮೈಸೂರಿನಿಂದ ಮಡಿಕೇರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾನೆ.
Next Story