ಅಬ್ಬಿಪಾಲ್ಸ್ ಬಳಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ
ಸಕಲೇಶಪುರ,ಮಾ.5: ಜಲಪಾತ ವೀಕ್ಷಿಸಲು ತೆರಳಿದ್ದ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ‘ಅಬ್ಬಿಪಾಲ್ಸ್’ ಬಳಿ ನಡೆದಿದೆ.
ಆಕಾಶ್ (26) ಪ್ರಶಾಂತ್ (29) ಗಣೇಶ್ (32)ಮತ್ತು ಸುರೇಶ್ ಗಾಯಗೊಂಡಿರುವ ಯುವಕರಾಗಿದ್ದು, ಕೈ, ಕಾಲು, ತಲೆ ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಭಾನುವಾರ ರಾತ್ರಿ 9:30 ರ ಸಂದರ್ಭದಲ್ಲಿ ಅಬ್ಬಿಪಾಲ್ಸ್ ವೀಕ್ಷಿಸಿದ ಯುವಕರ ತಂಡ ಮರಳಿ ತಮ್ಮ ವಾಹನದ ಬಳಿ ಬಂದಾಗ ವಾಹನದ ಚಕ್ರದ ಗಾಳಿ ಖಾಲಿಯಾಗಿತ್ತು. ಇದರಿಂದ ಹತಾಶರಾದ ಯುವಕರು ಅಕ್ರೋಶ ವ್ಯಕ್ತಪಡಿಸಿದಾಗ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Next Story