ಮಂಡ್ಯದಲ್ಲಿ ಸ್ಪರ್ಧೆ ಮನದ ಪ್ರಶ್ನೆ : ಸುಮಲತಾ
ಮಂಡ್ಯ, ಮಾ.7: ಮಂಡ್ಯ ಬಿಟ್ಟರೆ ಬೇರಲ್ಲೂ ನಿಲ್ಲಲ್ಲ. ಮಂಡ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಮನದ ಪ್ರಶ್ನೆಯಾಗಿದೆ ಎಂದು ನಟಿ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮನ್ನು ಕಾಂಗ್ರೆಸ್ ನವರು ಬೆಂಬಲಿಸುತ್ತಾರೆ ಎಂದರು.
ಬಿಜೆಪಿ ನಾಯಕರು ನನ್ನ ಜೊತೆ ಮಾತನಾಡಿಲ್ಲ. ಅವರು ಸಂಪರ್ಕಿಸಿದರೆ ಮುಂದೆ ನೋಡೋಣ. ಚರ್ಚೆ ಮಾಡೋಣ. ಆದರೆ ನನಗೆ ಯಾವುದೇ ಹುದ್ದೆ ಬೇಡ ಎಂದರು.
Next Story