ವಸತಿ ಗೃಹದ ಎದುರು ನಿಲ್ಲಿಸಿದ್ದ ಬೈಕ್ ಗೆ ಬೆಂಕಿ
ಮಡಿಕೇರಿ, ಮಾ.13: ನಗರದ ಜಿಲ್ಲಾಸ್ಪತ್ರೆಯ ಡಿ. ಗ್ರೂಪ್ ವಸತಿ ಗೃಹದ ಎದುರು ನಿಲ್ಲಿಸಲಾಗಿದ್ದ ಬೈಕ್ವೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹೆರವನಾಡು ಗ್ರಾಮದ ಉಡೋತ್ ಮೊಟ್ಟೆ ನಿವಾಸಿ ಬಿ.ಎಸ್. ವೆಂಕಟೇಶ್ ಎಂಬುವವರಿಗೆ ಸೇರಿದ ರೋಯಲ್ ಎನ್ಫೀಲ್ಡ್ ಬೈಕ್ ಬೆಂಕಿಗೆ ಆಹುತಿಯಾಗಿದ್ದು, ಭಾಗಶಃ ಸುಟ್ಟು ಕರಕಲಾಗಿದೆ.
ವೆಂಕಟೇಶ್ ಜಿಲ್ಲಾಸ್ಪತ್ರೆಯ ಸರ್ಕಾರಿ ಆಂಬುಲೆನ್ಸ್ ವಾಹನ ಚಾಲಕನಾಗಿ ಕಾರ್ಯವಿರ್ವಹಿಸುತ್ತಿದ್ದು, ಮೈಸೂರಿಗೆ ಆಂಬುಲೆನ್ಸ್ ನಲ್ಲಿ ತೆರಳಿದ್ದರು. ರಾತ್ರಿ ಮರಳಿದಾಗ ಬೈಕ್ ಸುಟ್ಟು ಹೋಗಿರುವುದು ವೆಂಕಟೇಶ್ಗೆ ಗೋಚರಿಸಿದ್ದು, ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story