ಕಾಲೇಜು ವಿದ್ಯಾರ್ಥಿಯನ್ನು ಕೊಲೆಗೈದು ಸ್ಮಶಾನದಲ್ಲಿ ಹೂತು ಹಾಕಿದ ಸ್ನೇಹಿತರು
ನಾಲ್ವರು ಪೊಲೀಸ್ ವಶಕ್ಕೆ
ಮೈಸೂರು,ಮಾ.16: ಖಾಸಗಿ ಕಾಲೇಜು ವಿದ್ಯಾರ್ಥಿಯೋರ್ವನನ್ನು ಆತನ ನಾಲ್ವರು ಸ್ನೇಹಿತರೇ ಕೊಲೆಗೈದು ಸ್ಮಶಾನದಲ್ಲಿ ಹೂತಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊಲೆಯಾದ ವಿದ್ಯಾರ್ಥಿಯನ್ನು ಕುಂಬಾರಕೊಪ್ಪಲಿನ ನಿವಾಸಿ ರಾಘವೇಂದ್ರ(24)ಎಂದು ಗುರುತಿಸಲಾಗಿದೆ. ಈತ ಬುಧವಾರ ಮನೆಯಿಂದ ಹೊರಹೋದವನು ಮನೆಗೆ ವಾಪಸ್ ಬಂದಿರಲಿಲ್ಲ. ಆತನ ನಾಲ್ವರು ಸ್ನೇಹಿತರು ಕೂಡ ಕುಂಬಾರಕೊಪ್ಪಲಿನ ನಿವಾಸಿಗಳೇ ಎನ್ನಲಾಗಿದ್ದು, ಪೊಲೀಸರು ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಜೋಡಿ ತೆಂಗಿನಮರದ ಸ್ಮಶಾನದಲ್ಲಿ ಕೊಲೆ ಮಾಡಿ ಹೂತು ಹಾಕಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ವಿಜಯನಗರ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ಮತ್ತು ತಹಶೀಲ್ದಾರ್ ಭೇಟಿ ನೀಡಿದ್ದು, ಹೂತಿಟ್ಟ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆಯಲಾಯಿತು. ವಿಜಯನಗರ ಠಾಣೆ ಇನ್ಸಪೆಕ್ಟರ್ ಕುಮಾರ್ ಅವರು ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Next Story