ಸಂಸದ ಪ್ರತಾಪ್ ಸಿಂಹ ಉಗ್ರಗಾಮಿ, ಸುಳ್ಳುಗಾರ: ಪ್ರೊ.ಮಹೇಶ್ ಚಂದ್ರಗುರು
ಮೈಸೂರು,ಮಾ.23: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಓರ್ವ ಉಗ್ರಗಾಮಿ ಮತ್ತು ಸುಳ್ಳುಗಾರ ಎಂದು ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ವಾಗ್ದಾಳಿ ನಡೆಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ದಲಿತ ವೆಲ್ಫೇರ್ ಟ್ರಸ್ಟ್, ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ 'ಸಂವಿಧಾನ ರಕ್ಷಿಸಿ- ಮನುವಾದಿಗಳನ್ನು ಸೋಲಿಸಿ ಅಭಿಯಾನ' ದ ಕುರಿತು ಮಾತನಾಡಿದರು.
ಸಂಸದ ಪ್ರತಾಪ್ ಸಿಂಹ ಓರ್ವ ಉಗ್ರಗಾಮಿ ಮತ್ತು ಸುಳ್ಳುಗಾರನಾಗಿದ್ದು, ಅವನಿಂದ ಎಲ್ಲರಿಗೂ ಬಿಡುಗಡೆ ಸಿಗಬೇಕಾಗಿದೆ. ಈತ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಬರೀ ಸುಳ್ಳು ಹೇಳಿಕೊಂಡೇ ಕಾಲ ಹರಣ ಮಾಡುತ್ತಿದ್ದಾನೆ. ಈತನ ಗೋಸುಂಬೆ ರಾಜಕಾರಣಕ್ಕೆ ಯಾರೂ ಬೆಲೆ ಕೊಡಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಪ್ರೊ.ಶಬ್ಬೀರ್ ಮುಸ್ತಫಾ, ವಕೀಲ ಎಸ್. ಮಹೇಶ್, ಪ್ರೊ.ಟಿ.ಎಂ. ಮಹೇಶ್, ಮಹದೇವಮೂರ್ತಿ, ಚಿಕ್ಕಂದಾನಿ ಉಪಸ್ಥಿತರಿದ್ದರು.
Next Story