ದಾವಣಗೆರೆ ಲೋಕಸಭಾ ಕ್ಷೇತ್ರ: ಆರು ನಾಮಪತ್ರ ಸಲ್ಲಿಕೆ
ದಾವಣಗೆರೆ,ಎ.3: ಎಪ್ರಿಲ್ 23 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾ.28 ರಿಂದ ಆರಂಭವಾಗಿದ್ದು, ಎ.3 ರ ಇಂದು ಜಿಲ್ಲೆಯಲ್ಲಿ 6 ನಾಮಪತ್ರ ಸಲ್ಲಿಕೆಯಾಗಿದೆ.
ಆಲೂರು ಎಂ.ಜಿ.ಸ್ವಾಮಿ(ಸಾಮಾನ್ಯ) ಪಕ್ಷೇತರ ಅಭ್ಯರ್ಥಿಯಾಗಿ, ರವೀಂದ್ರ. ಎನ್(ಸಾಮಾನ್ಯ) ಇಂಡಿಯನ್ ಲೇಬರ್ ಪಾರ್ಟಿ(ಅಂಬೇಡ್ಕರ್ ಪುಲೆ) ಅಭ್ಯರ್ಥಿಯಾಗಿ, ಟಿ.ಜಿ.ಮಧು (ಸಾಮಾನ್ಯ) ಸೋಷಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಅಭ್ಯರ್ಥಿಯಾಗಿ, ದಾದಾ ಖಲಂದರ್(ಸಾಮಾನ್ಯ) ಪಕ್ಷೇತರ ಅಭ್ಯರ್ಥಿಯಾಗಿ, ಸಿದ್ದಪ್ಪ.ಬಿ.ಹೆಚ್(ಪ.ಪಂ) ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಯಾಗಿ, ಹಾಗೂ ಹೆಚ್.ಈಶ್ವರಪ್ಪ(ಪ.ಜಾ) ಇಂಡಿಯಾ ಪ್ರಜಾಬಂಧು ಪಾರ್ಟಿ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ಇವರಿಗೆ ಜಿಲ್ಲಾಡಳಿತ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
Next Story