ಕ್ರಿಕೆಟ್ ಆಟದ ವೇಳೆ ಜಗಳ: ಮೈದಾನದಲ್ಲೇ ಕತ್ತುಕುಯ್ದು ವ್ಯಕ್ತಿಯ ಕೊಲೆ
ಕೋಲಾರ,ಎ.7: ಕ್ರಿಕೆಟ್ ಆಡುತ್ತಿದ್ದಾಗ ಉಂಟಾದ ಸಣ್ಣ ಜಗಳ, ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ವರದಾಪುರ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ್ (35) ಕೊಲೆಯಾದ ವ್ಯಕ್ತಿ. ನವೀನ್ ಕೊಲೆ ಆರೋಪಿ ಎಂದು ತಿಳಿದುಬಂದಿದೆ.
ಯುಗಾದಿ ಹಬ್ಬದ ಸಂಭ್ರಮದಲ್ಲಿ ಗ್ರಾಮದಲ್ಲಿ ಕ್ರಿಕೆಟ್ ಆಡುತ್ತಿರುವಾಗ ನವೀನ್ ಹಾಗೂ ಶ್ರೀನಿವಾಸ್ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ಕುಡಿತದ ಅಮಲಿನಲ್ಲಿದ್ದ ನವೀನ್ ಕತ್ತುಕುಯ್ದು ಶ್ರೀನಿವಾಸ್ ನನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಮಾಸ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story