ಅಪಘಾತ: ಗ್ರಾ.ಪಂ ಬಿಲ್ ಕಲೆಕ್ಟರ್ ಮೃತ್ಯು
ಮಂಡ್ಯ, ಎ.7: ಬೈಕ್ಗೆ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಬಸರಾಳು ಗ್ರಾ.ಪಂ ಬಿಲ್ ಕಲೆಕ್ಟರ್ ಜಯರಾಮಯ್ಯ(52) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸರಾಳು ಬಳಿ ರವಿವಾರ ಬೆಳಗ್ಗೆ ನಡೆದಿದೆ.
ಬೆಳಗ್ಗೆ 6 ಗಂಟೆಯಲ್ಲಿ ಜಯರಾಮಯ್ಯ ಮಾಂಸ ತರಲು ನಾಗಮಂಗಲ ಮಂಡ್ಯ ಹೆದ್ದಾರಿಯಲ್ಲಿನ ಹೇಮಾವತಿ ಕ್ವಾಟ್ರಸ್ಗೆ ಬರುತ್ತಿದ್ದಾಗ ನಾಗಮಂಗಲ ಕಡೆಯಿಂದ ಕೋಳಿ ತುಂಬಿಕೊಂಡು ಬರುತ್ತಿದ್ದ ಆಟೋ ಜಯರಾಮಯ್ಯ ಅವರ ಬೈಕ್ಗೆ ಢಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಹಿಂದೆ ಬರುತ್ತಿದ್ದ ಟಿ.ವಿ.ಎಸ್ ಮೊಪೆಡ್ ಕೂಡ ಬೈಕ್ಗೆ ಢಿಕ್ಕಿಯಾಗಿ ಅದರಲ್ಲಿ ಪುತ್ರನೊಂದಿಗೆ ಬರುತ್ತಿದ್ದ ಸಾವಿತ್ರಮ್ಮ(65) ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾಸ್ಪತೆಗೆ ದಾಖಲಿಸಲಾಗಿದೆ. ಬಸರಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story