ಮೈಸೂರಿಗೆ ಮಾಯಾವತಿ ಬಂದಿರುವುದರಿಂದ ಪರಿಣಾಮ ಬೀರಬಹುದು: ಮಾಜಿ ಸಿಎಂ ಎಸ್.ಎಂ.ಕೃಷ್ಣ
ಮೈಸೂರು,ಎ.10: ಮಾಯಾವತಿ ಒಬ್ಬರು ಪ್ರಭಾವಿ ರಾಜಕಾರಣಿಯಾಗಿದ್ದು, ಮೈಸೂರಿನಲ್ಲಿ ಅವರು ಬಂದಿರುವುದರಿಂದ ಪರಿಣಾಮ ಬೀರಬಹುದು. ಅದು ಯಾವ ಪಕ್ಷಕ್ಕೆ ಪರಿಣಾಮ ಬೀರುತ್ತೆ ಅಂತ ಗೊತ್ತಿಲ್ಲ ಎಂದು ಮಾಜಿ ಸಿಎಂ ಎಸ್. ಎಂ ಕೃಷ್ಣ ತಿಳಿಸಿದ್ದಾರೆ.
ಗೋಪಾಲಗೌಡ ಶಾಂತವೇರಿ ಆಸ್ಪತ್ರೆ ನೂತನ ನ್ಯೂರೋ ಜೋನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮೈಸೂರಿಗೆ ಆಗಮಿಸಿದ್ದು, ಅವರ ಮೈಸೂರು ಪ್ರವಾಸದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ, ಮಾಯಾವತಿ ಅವರು ಈಗಾಗಲೇ ಕಾಂಗ್ರೆಸ್ ಜೊತೆ ಹೋಗಲ್ಲ ಅಂತ ಹೇಳಿದ್ದಾರೆ. ಅವರ ಮೈಸೂರು ಪ್ರವಾಸ ಪರಿಣಾಮ ಬೀರಬಹುದು. ಅದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗುತ್ತದೆ ಎಂದರು.
ಮಂಡ್ಯದಲ್ಲಿ ಅಭ್ಯರ್ಥಿಗಳು ಗೆಲ್ಲುವುದು ಮತದಾರರನ್ನ ಅವಲಂಬಿಸಿದೆ. ಇಷ್ಟಾದರು ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಗೆ ನಿಲ್ಲಿಸಿರುವುದು ಅವರ ವೈಯಕ್ತಿಕ ವಿಚಾರ. ಇದರ ಬಗ್ಗೆ ನಾನು ಮಾತನಾಡಲ್ಲ. ಇನ್ನು ಮೈತ್ರಿಯಲ್ಲಿ ಗೊಂದಲ ಮುಂದುವರಿದಿದ್ದು ಸದ್ಯಕ್ಕೆ ಬಗೆಹರಿಯುವ ಯಾವುದೆ ಲಕ್ಷಣ ಕಾಣುತ್ತಿಲ್ಲ ಎಂದು ಎಸ್.ಎಂ ಕೃಷ್ಣ ತಿಳಿಸಿದರು.