ರಸ್ತೆ ಅಪಘಾತ: ಬೈಕ್ ಸವಾರ ಮೃತ್ಯು
ಮಂಡ್ಯ, ಎ.21: ಹೆದ್ದಾರಿ ತಡೆಗೋಡೆಗೆ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲೇ ಸಾವಿಗೀಡಾರುವ ಘಟನೆ ಮದ್ದೂರಿನ ಶಿವಪುರ ಬಳಿ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮದ್ದೂರು ತಾಲೂಕು ಗೌಡಯ್ಯನದೊಡ್ಡಿ ಪುಟ್ಟರಾಮು ಪುತ್ರ ಜಿ.ಮನೋಜ್ ಕುಮಾರ್(29) ಸಾವನ್ನಪ್ಪಿದ ಯುವಕ. ಈತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಹಿಂತಿರುಗುವಾಗ ಈ ಘಟನೆ ಸಂಭವಿಸಿದೆ.
ಮದ್ದೂರು ಸಂಚಾರಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story