ಹಿರಿಯ ಗಂಡಾನೆ ಸಾವು
ಹನೂರು, ಎ.23: ಕಾವೇರಿ ವನ್ಯಧಾಮ ಹನೂರು ವಲಯದ ಶಾಗ್ಯ ಬೀಟ್ನ ಕಾಂಡಿಂಚಿನ ಕೊಂಚಲು ಸಿಪಿಟಿ 26 ಕಾರಯ್ಯನ ಬೆಟ್ಟ ಗಸ್ತುನಲ್ಲಿ 55 ವರ್ಷದ ಗಂಡಾನೆ ಸಾವನ್ನಪ್ಪಿರುವ ಘಟನೆ ನೆಡೆದಿದೆ.
ಕಾವೇರಿ ವನ್ಯಧಾಮದಲ್ಲಿ ಒಂಟಿಕೊರೆ ಗಂಡಾನೆಯೊಂದು ಸಾವನ್ನಪ್ಪಿರುವ ಬಗ್ಗೆ ಗಸ್ತಿನಲ್ಲಿದ್ದ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಕಾವೇರಿ ವನ್ಯದಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜ್ ವಲಯ ಅರಣ್ಯಾಧಿಕಾರಿ ರಾಜಶೇಖರಪ್ಪ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಬಳಿಕ ಹನೂರು ಪಶು ವೈದ್ಯಾಧಿಕಾರಿ ಸಿದ್ದರಾಜು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವಯಸ್ಸಾದ ಕಾರಣ ಆನೆ ಸ್ವಾಭಾವಿಕವಾಗಿ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.
Next Story