ಹನೂರು: ಚಿರತೆ ದಾಳಿಗೆ ಎರಡು ಕುರಿಗಳು ಬಲಿ
ಹನೂರು, ಎ.23: ಮಲೈಮಹದೇಶ್ವರ ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಅರಣ್ಯಪ್ರದೇಶದಿಂದ ಚಿರತೆ ಒಂಟಿ ಮಾಲಾಪುರ ತೋಟ ಮನೆಯಲ್ಲಿದ್ದ 2 ಕುರಿಗಳನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಬಗ್ಗೆ ರೈತ ಹನೂರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸೋಮವಾರ ತಡ ರಾತ್ರಿ ಒಂಟಿ ಮಾಲಾಪುರ ಗ್ರಾಮದ ರೈತ ವೆಂಕಟೇಗೌಡ ತಮ್ಮ ಜಮೀನನಲ್ಲಿದ್ದ 2 ಕುರಿಗಳನ್ನು ದಾಳಿ ಮಾಡಿ ಕೊಂದು ಹಾಕಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಾರಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಮೀಪದ ಬೆಲ್ಲದ ಕೆರೆ ಹಾಗೂ ಉದ್ದನೂರು, ಬೆಳತ್ತೂರು, ಮಾಲಾಪುರ ಸುತ್ತಮುತ್ತ ಹೆಚ್ಚಾಗಿ ತೋಟದ ಮನೆಗಳಲ್ಲಿ ವಾಸಿಸುವ ರೈತರು ಹಾಗೂ ಗ್ರಾಮಸ್ಥರು ಚಿರತೆ ದಾಳಿಯಿಂದ ಭಯಭೀತರಾಗಿದ್ದು, ಕೂಡಲೇ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಾರಿಳು ಕ್ರಮಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
Next Story