ಸಿಕ್ಕ ಪರ್ಸ್ ವಾರಸುದಾರರಿಗೆ ಒಪ್ಪಿಸಿದ ಹೆಡ್ಕಾನ್ಸ್ಟೇಬಲ್
ಮಂಡ್ಯ, ಮೇ 11: ನ್ಯೂ ಬೀಟ್ ಹಗಲು ಕರ್ತವ್ಯಕ್ಕೆ ತೆರಳಿದ್ದ ಮುಖ್ಯ ಪೇದೆ ಬೊಮ್ಮಲಿಂಗಯ್ಯ ಅವರು ತನಗೆ ಸಿಕ್ಕಿದ್ದ 25 ಸಾವಿರ ರೂ.ಗಳಿದ್ದ ಪರ್ಸನ್ನು ಸಂಬಂಧಿಸಿದ ವ್ಯಕ್ತಿಗೆ ತಲುಪಿಸಿದ್ದಾರೆ.
ಕರ್ತವ್ಯದಲ್ಲಿದ್ದ ಬೊಮ್ಮಲಿಂಗಯ್ಯ ಅವರಿಗೆ ನಗರದ ಹೌಸಿಂಗ್ ಬೋರ್ಡ್ನ ಅಂಗಡಿಯ ಬಳಿಯೇ ಸಿಕ್ಕಿದ ಪರ್ಸ್ನಲ್ಲಿ 25 ಸಾವಿರ ರೂ.ಗಳಿದ್ದು, ವಾರಸುದಾರ ಅಮೃತ್ ಅವರಿಗೆ ನೀಡಿದರು.
ಈ ಸಮಯದಲ್ಲಿ ಡಿವೈಎಸ್ಪಿ ಎಸ್.ಇ. ಗಂಗಾಧರಸ್ವಾಮಿ, ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಸಂಚಾರಿ ಉಪ ನಿರೀಕ್ಷಕ ಕೆ.ಎಸ್.ನಿರಂಜನ ಗ್ರಾಮಾಂತರ ವೃತ್ತ ನಿರೀಕ್ಷಕ ನೇಮಿರಾಜ್ ಹಾಗೂ ಪತ್ರಕರ್ತ ಬಿ.ಪಿ.ಪ್ರಕಾಶ್ ಹಾಜರಿದ್ದರು.
Next Story