ಬಾಗೇಪಲ್ಲಿ: ಚುನಾವಣಾ ಅಭ್ಯರ್ಥಿ-ಪೊಲೀಸರ ನಡುವೆ ಮಾತಿನ ಚಕಮಕಿ
ಬಾಗೇಪಲ್ಲಿ, ಮೇ 16: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ನರಸಿಂಹಮೂರ್ತಿ ಮತ್ತು ಪೊಲೀಸರ ನಡುವೆ ಮಾತಿ ಚಕಮಕಿ ಘಟನೆ ನಡೆಯಿತು.
ಮೇ 29ರಂದು ನಡೆಯುವ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆಯ ಮುಂಭಾಗ 4ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ನರಸಿಂಹಮೂರ್ತಿ ಅವರು ತಮ್ಮ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಸಲು ತೆರಳಿದ್ದರು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಭ್ಯರ್ಥಿ ಜೊತೆ 4 ಜನ ಮಾತ್ರ ಹೋಗಲು ಅವಕಾಶವಿದೆ. ಹೀಗಾಗಿ ಪೊಲೀಸರು ಅಭ್ಯರ್ಥಿಯ ಬೆಂಗಲಿಗರನ್ನು ಬಿಡದ ಸಂಬಂಧ ಪೊಲೀಸರು ಮತ್ತು ಅಭ್ಯರ್ಥಿ ಎ.ನರಸಿಂಹಮೂರ್ತಿ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
Next Story