ದುರಹಂಕಾರ ಮಣ್ಣು ಪಾಲಾಯಿತು ..ಬಿಳಿ ಕಾಲರ್ ಸುಕ್ಕಾಯಿತು: ಡಿವಿಎಸ್
ಬೆಂಗಳೂರು, ಮೇ 23: ಕರ್ನಾಟಕದ ಮೈತ್ರಿ ಸರಕಾರಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಜನಾದೇಶಕ್ಕೆ ಮನ್ನಣೆ ನೀಡಿ ಅಧಿಕಾರ ಬಿಟ್ಟು ಕೆಳಗಿಳಿಯಲಿ ಎಂದು ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಗೆಲುವಿನೊಂದಿಗೆ ಸತತ 2ನೇ ಬಾರಿ ಲೋಕಸಭೆ ಪ್ರವೇಶಿಸಿರುವ ಡಿವಿಎಸ್ ಅವರು “ಮೈತ್ರಿ ನಾಯಕರೇ ನಿಮ್ಮ ಬಳಿ ಯಾವುದಾದರೂ ಮುಖ ಉಳಿದಿದೆಯಾ ? ದುರಹಂಕಾರ ಮಣ್ಣು ಪಾಲಾಯಿತು , ಬಿಳಿ ಕಾಲರ್ ಸುಕ್ಕಾಯಿತು’ ಎಂದು ಹೇಳಿದ್ದಾರೆ.
ದುರಹಂಕಾರದಿಂದ ನನ್ನನ್ನು ಟೀಕಿಸಿದ , ನನ್ನ ನಗುವನ್ನು ಅಪಹಾಸ್ಯಗೈದ , ವೈಯುಕ್ತಿಕ ನಿಂದನೆಗೆ ಇಳಿದ ಅತಿ ಬುದ್ದಿವಂತ ವಿರೋಧ ಪಕ್ಷ ನಾಯಕರುಗಳಿಗೆ ನನ್ನ ಕ್ಷೇತ್ರದ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ . ಜನ ಸೇವಕನಾಗಿ ನಾನು ಸದಾ ಲಭ್ಯ ಎಂದು ಟ್ವೀಟ್ ಮಾಡಿದ್ದಾರೆ.
Next Story