ಮಡಿಕೇರಿ: ಮಳೆ ಮುನ್ನೆಚ್ಚರಿಕೆ; ಹೋಂಸ್ಟೇ ಬುಕಿಂಗ್ ಸ್ಥಗಿತಕ್ಕೆ ಸೂಚನೆ
ಮಡಿಕೇರಿ, ಮೇ 31 : ಪ್ರವಾಸಿಗರಿಗಾಗಿ ಹೋಂಸ್ಟೇಗಳನ್ನು ಕಾಯ್ದಿರಿಸುವ ಬುಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಹೋಂಸ್ಟೇ ಮಾಲೀಕರುಗಳಿಗೆ ಮಕ್ಕಂದೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸೂಚನೆ ನೀಡಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾಕಷ್ಟು ಆಸ್ತಿ ಹಾಗೂ ಜೀವಹಾನಿ ಸಂಭವಿಸಿದ್ದು, ಈ ವರ್ಷವೂ ಕೂಡ ಬರೆ, ರಸ್ತೆ ಕುಸಿತ ಸಂಭವ ಇರುವುದಾಗಿ ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿರುವುದರಿಂದ ಮುನ್ನಚ್ಚರಿಕಾ ಕ್ರಮವಾಗಿ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಹೋಂಸ್ಟೇ ಗಳಲ್ಲಿ ಬುಕಿಂಗ್ ಸ್ಥಗಿತಗೊಳಿಸಬೇಕೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸೂಚನೆಯನ್ನು ಮೀರಿ ಅತಿಥಿಗಳು ವಾಸ್ತವ್ಯ ಹೂಡಿ ಸಂಕಷ್ಟಕ್ಕೆ ಸಿಲುಕಿದರೆ ಸಂಬಂಧಿಸಿದ ಹೋಂಸ್ಟೇ ಮಾಲೀಕರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.
Next Story