ಐಎಂಎ ಬಹುಕೋಟಿ ಹಗರಣ ಪ್ರಕರಣ: ಹೂಡಿಕೆದಾರ ಹೃದಯಾಘಾತದಿಂದ ಮೃತ್ಯು
ಬೆಂಗಳೂರು, ಜೂ.13: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಮುಂದಾಗುತ್ತಿರುವಾಗಲೇ, ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಅಬ್ದುಲ್ ಪಾಷಾ(54) ಎಂಬುವವರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಹಳೆ ಗುಡ್ಡದಹಳ್ಳಿ ನಿವಾಸಿ ಅಬ್ದುಲ್ ಪಾಷಾ, ಐಎಂಎ ನಲ್ಲಿ 2 ಲಕ್ಷ, ತನ್ನಿಬ್ಬರು ಹೆಣ್ಣುಮಕ್ಕಳಿಂದ ತಲಾ 3 ಲಕ್ಷ ಸೇರಿ ಒಟ್ಟು 8 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದರು. ಮಗಳ ಮದುವೆಗಾಗಿ ಹಣ ಹೂಡಿದ್ದರು. ಐಎಂಎ ಸಂಸ್ಥೆಯ ಮನ್ಸೂರ್ ಖಾನ್ ನಾಪತ್ತೆಯಾದ ಸುದ್ದಿ ಕೇಳಿ ಆಘಾತಕ್ಕೊಳಗಾದ ಅಬ್ದುಲ್ ಪಾಷಾ ಅವರು ಹೃದಯಾಘಾತಕ್ಕೊಳಗಾದರು. ಅವರು ತಕ್ಷಣ ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9.30 ಕ್ಕೆ ಅಸುನೀಗಿದರು ಎಂದು ತಿಳಿದುಬಂದಿದೆ.
Next Story