ಐಎಂಎ ಜ್ಯೂವೆಲ್ಲರ್ಸ್ ಮಾಲಕ ಮನ್ಸೂರ್ ಖಾನ್ ಜೂ.8ರಂದೇ ದುಬೈಗೆ ಪರಾರಿ
ಬೆಂಗಳೂರು, ಜೂ.14: ಸಾವಿರಾರು ಮಂದಿಗೆ ಕೋಟ್ಯಂತರ ರೂ.ವಂಚಿಸಿರುವ ಪ್ರಕರಣದ ಆರೋಪಿ ಐಎಂಎ ಜ್ಯೂವೆಲ್ಲರ್ಸ್ ಮಾಲಕ ಮುಹಮ್ಮದ್ ಮನ್ಸೂರ್ ಖಾನ್ ಜೂನ್ 8ರಂದೇ ದುಬೈಗೆ ಪರಾರಿಯಾಗಿರುವ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ರಾತ್ರಿ 8:45ರ ಎಮಿರೆಟ್ಸ್ ಫ್ಲೈಟ್ ನಲ್ಲಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈತ ವಿದೇಶಕ್ಕೆ ತೆರಳುವ ಮೊದಲು 19 ಕೋಟಿ ರೂ. ಈತನ ಖಾತೆಗೆ ವರ್ಗಾವಣೆಯಾಗಿದೆ ಎನ್ನಲಾಗಿದೆ.
ಈ ನಡುವೆ ಐಎಂಎ ಸಂಸ್ಥೆಯ ಆಡಿಟರ್ ಇಕ್ಬಾಲ್ ಖಾನ್ ರನ್ನು ತನಿಖಾ ತಂಡ ಎಸ್ಐಟಿ ವಶಕ್ಕೆ ತೆಗೆದುಕೊಂಡಿದೆ.
ಐ ಎಂಎ ಸಂಸ್ಥೆಯಿಂದ ವಂಚನೆಗೊಳಗಾದ ಮಹಿಳೆಯರು ‘ಲೇಡಿಸ್ ಐಎಂಎ ಗ್ರೂಪ್' ಎಂಬ ವಾಟ್ಸಾಪ್ ಗ್ರೂಪ್ ನ್ನು ರಚಿಸಿದ್ದಾರೆ. ಕೇಸ್ ಸಂಬಂಧ ಮಾಹಿತಿಯನ್ನು ಹಂಚಿಕೊಳ್ಳಲು ಗ್ರೂಪ್ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
Next Story