ಮೂವರು ಮಕ್ಕಳನ್ನು ಕೊಲೆಗೈದು ತಾಯಿ ಆತ್ಮಹತ್ಯೆ
ಕೊಪ್ಪಳ, ಜೂ.18: ತಾಯಿ ತನ್ನ ಮೂವರು ಮಕ್ಕಳನ್ನು ಹತ್ಯೆಗೈದು ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಕುಕನೂರು ತಾಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಯಲ್ಲಮ್ಮ(30), ಮಕ್ಕಳಾದ ಅಕ್ಷತಾ(7), ಕಾವ್ಯಾ(4) ಹಾಗೂ ನಾಗರಾಜ್(2) ದುರಂತ ಸಾವನ್ನಪ್ಪಿದವರು. ಯಲ್ಲಮ್ಮನ ಹಿರಿಯ ಮಗಳಾದ ಅಕ್ಷತಾಳನ್ನು ಕುಡಿಯುವ ನೀರಿನ ಹಂಡೆಯೊಳಗೆ ಮುಳುಗಿಸಿ ಹತ್ಯೆ ಮಾಡಿದ್ದರೆ, ಎರಡನೇ ಪುತ್ರಿ ಕಾವ್ಯಾಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಮತ್ತು ಮೂರನೇ ಪುತ್ರ ನಾಗರಾಜ್ನನ್ನುನೀರಿನ ಹೌಜಿನಲ್ಲಿ ಮುಳಗಿಸಿ ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಯಿ ಯಲ್ಲಮ್ಮನ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಯ ವೇಳೆ ಯಲ್ಲಮ್ಮರ ಪತಿ ಉಮೇಶ ಬಾರಕೇರ ಮನೆಯ ಹೊರಗೆ ಮಲಗಿದ್ದ ಎಂದು ಹೇಳಲಾಗಿದೆ.
ಈ ಬಗ್ಗೆ ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
Next Story