ಪಿಡಬ್ಲ್ಯೂಡಿ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ
ಹಾಸನ, ಜೂ.21: ಶುಕ್ರವಾರ ಬೆಳಗ್ಗೆ ನಗರದ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಚನ್ನೇಗೌಡರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ಇಲಾಖೆ ಡಿಎಸ್ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ಹೇಮಾವತಿ ನಗರದಲ್ಲಿರುವ ಚನ್ನೇಗೌಡರ ನಿವಾಸಕ್ಕೆ ದಾಳಿ ನಡೆಸಲಾಗಿದೆ. ಆದರೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಧಿಕಾರಿಗಳು ಚನ್ನೇಗೌಡರಿಗೆ ಕರೆ ಮಾಡಿ, ಎಲ್ಲಿದ್ದರೂ ಈ ಕೂಡಲೇ ಮನೆಗೆ ಬರಬೇಕೆಂದು ಸೂಚನೆ ನೀಡಿದ್ದಾರೆ.
ಚನ್ನೇಗೌಡ ಅವರು ಸಾಕಷ್ಟು ಆಸ್ತಿ ಮತ್ತು ಹಣ ಗಳಿಸಿದ್ದಾರೆ ಎಂಬುದರ ಬಗ್ಗೆ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಪರಿಶೀಲಿಸಲು ಆಗಮಿಸಿದ್ದಾರೆ. ಮನೆ ಮಾಲಕರು ಬರುವವರೆಗೂ ಮುಂಭಾಗದಲ್ಲಿಯೇ ಎಸಿಬಿ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಮನೆಯಿಂದ ಯಾವುದೇ ವಸ್ತುಗಳು ಹೊರ ಹೋಗದಂತೆ ನೋಡಿಕೊಳ್ಳಲು ಮಫ್ತಿಯಲ್ಲಿರುವ ಪೊಲೀಸರನ್ನು ನಿಯೋಜಿಸಲಾಗಿದೆ. ದಾಳಿಗೆ ಬಂದ ವೇಳೆ ತಂದಿದ್ದ ಎಲ್ಲ ಪರಿಕರಗಳನ್ನು ಮನೆಯ ಮುಂಭಾಗದಲ್ಲಿ ಇಟ್ಟುಕೊಂಡು ಚನ್ನೇಗೌಡರ ಬರುವಿಕೆಗಾಗಿ ಅಧಿಕಾರಿಗಳು ಕಾದು ಕುಳಿತಿದ್ದರು.
Next Story