ಮರಕ್ಕೆ ಕಾರು ಢಿಕ್ಕಿ; ಮೂವರು ಮೃತ್ಯು
ಬೆಂಗಳೂರು, ಜೂ.23: ಮಾಗಡಿ ತಾಲೂಕಿನ ಹುಚ್ಚಹನುಮೇಗೌಡ ಪಾಳ್ಯದ ಬಳಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.
ಕಾರಿನಲ್ಲಿದ್ದ ನರಸಮ್ಮ(60) , ಜಯಲಕ್ಷ್ಮೀಯಮ್ಮ (40) ಮತ್ತು ಕುಮಾರ್ (35) ಮೃತಪಟ್ಟಿದ್ದಾರೆ .
ಇಬ್ಬರು ಗಾಯಗೊಂಡಿದ್ದಾರೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.
Next Story