ಶರಣಪ್ಪ ಕೊಟಗಿಗೆ ಅಂತಾರಾಷ್ಟ್ರೀಯ ಸಾಧಕ ಪ್ರಶಸ್ತಿ
ಹುಬ್ಬಳ್ಳಿ, ಜೂ.23: ಶ್ರೀಬಸವೇಶ್ವರ ರೂರಲ್ ಎಜ್ಯುಕೇಶನ್ ಅಂಡ್ ಡೆವಲಪ್ಮೆಂಟ್ ಟ್ರಸ್ಟ್ ಕಾರ್ಯದರ್ಶಿ ಶರಣಪ್ಪ ಕೊಟಗಿ ಅವರ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಮತ್ತು ವಿಶ್ವಶಾಂತಿ ಫೌಂಡೇಶನ್ ವತಿಯಿಂದ ಪುಸ್ತಕ ಸಾಲಿನ ಅಂತಾರಾಷ್ಟ್ರೀಯ ಸಾಧಕ ವ್ಯಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಮಲೇಶಿಯಾದ ಕೌಲಾಲಂಪುರದಲ್ಲಿ ನಡೆದ 20ನೆ ಅಂತರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಪ್ರೊ.ಅರುಣಾ ಗೋಪಿನಾಥ್, ಮಲೇಶಿಯಾ ಸರಕಾರದ ಕೋ-ಆರ್ಡಿನೇಟರ್ ಕರುಪಯ್ಯೊ ಆಡಿನೇಚರ್, ಕಲ್ಕತ್ತಾದ ಪರಂಪರಾ ಆಯುರ್ವೇದ ವಿವಿಯ ಎಂ.ಡಿ.ದೇಬಬ್ರತ್ ಸೇನ್, ಹೋಮಿಯೋ ಸಂಸ್ಥೆಯ ನಿರ್ದೇಶಕ ಚಿಂತ ರವೀಂದರ್, ಲೇಖಕಿ ಡಾ.ವಿ.ವಿ.ರಾಜೇಶ್ವರಿ, ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಂಸ್ಥೆ ಹಾಗೂ ಮಲೇಶಿಯಾದ ಗ್ಲೋಬಲ್ ಪೀಸ್ ಫೌಂಡೇಶನ್ ಚೇರಮನ್ ಕೆ.ಪಿ.ಮಂಜುನಾಥ್, ಸಾಗರ ಮತ್ತಿತರರು ಉಪಸ್ಥಿತರಿದ್ದರು