ಹನೂರು : ರಸ್ತೆ ಅಪಘಾತ; ಹಲವು ಮಂದಿಗೆ ಗಾಯ
ಹನೂರು : ಟಾಟಾ ಸುಮೋ ಹಾಗೂ ಕಾರು ನಡುವೆ ಢಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡಿರುವ ಘಟನೆ ಹನೂರು ಸಮೀಪದ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಎಲ್ಲೆಮಾಳ ಗ್ರಾಮದ ಸಮೀಪ ನೆಡೆದಿದೆ.
ಘಟನೆ ವಿವರ: ಮಹದೇಶ್ವರಬೆಟ್ಟದಿಂದ ಆಗಮಿಸುತ್ತಿದ್ದ ಓಮ್ನಿ ಹಾಗೂ ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟ ಕಡೆ ಹೋಗುತ್ತಿದ್ದ ಟಾಟಾ ಸುಮೋ ನಡುವೆ ಅಪಘಾತ ಸಂಭವಿಸಿದೆ.
ಮೈಸೂರು ಜಿಲ್ಲೆಯ ಚಿಕ್ಕಳ್ಳಿ ಗ್ರಾಮದವರಾದ ಮಹಾಲಿಂಗಪ್ಪ (30) ಅಭಿಷೇಕ್ (22) ಆಲೂತ್ತೂರು ಹೋಬಳಿಯ ಕುಮಾರ್ (36) ದೇವನಪುರದ ನಾಗರಾಜು (50) ವರುಣಾ ಹೋಬಳಿಯ ದಂಡಿಕೆರೆ ಗ್ರಾಮದ ಸತೀಶ್ (30) ಹಾಗೂ ಚಿಕ್ಕಳ್ಳಿ ಗ್ರಾಮದ ಕುಮಾರ್( 40) ಇವರುಗಳು ಅಮವಾಸೆ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟೆದ ಕಡೆ ಪೂಜೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಹನೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ ನಂತರ ಕೊಳ್ಳೇಗಾಲ ಹಾಗೂ ಮೈಸೂರು ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
Next Story