ನಾಲೆಗೆ ಬಿದ್ದ ಟಿಪ್ಪರ್: ಚಾಲಕನಿಗೆ ಗಾಯ
ಹಾಸನ, ಜು.3: ಟಿಪ್ಪರ್ ಲಾರಿಯೊಂದು ಕಟ್ಟಾಯದ ಬಳಿ ಕಲ್ಲಿನ ಪುಡಿ ತುಂಬಿಕೊಂಡ ಚಲಿಸುತ್ತಿದ್ದಾಗ ಎತ್ತಿನಗಾಡಿಯನ್ನು ತಪ್ಪಿಸಲು ಹೋಗಿ ಯಗಚಿ ಎಡದಂಡೆ ನಾಲೆಗೆ ಬಿದ್ದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಹಾಸನ ತಾಲೂಕಿನ ಕಟ್ಟಾಯದ ಬಳಿ ಇರುವ ಕಲ್ಲು ಗಣಿಯಿಂದ ಪುಡಿಯನ್ನು ಟಿಪ್ಪರ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಸಲ್ಪ ದೂರದಲ್ಲಿಯೇ ಸಿಗುವ ಬೊಮ್ಮನಹಳ್ಳಿ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಎತ್ತಿನಗಾಡಿಗೆ ದಾರಿ ಬಿಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಯಗಚಿ ಎಡದಂಡೆ ನಾಲೆಗೆ ಬಿದ್ದಿದೆ. ಪರಿಣಾಮ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ವಾಹನವನ್ನು ಮೇಲೆತ್ತಲು ಕ್ರೈನ್ ಬಂದರೂ ಎತ್ತಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
Next Story