ಆಸ್ತಿ ವಿವಾದ: ಅತ್ತೆಯನ್ನೇ ಮಚ್ಚಿನಿಂದ ಕೊಚ್ಚಿದ ಅಳಿಯ
ದಾವಣಗೆರೆ, ಜು.8: ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ತನ್ನ ಅತ್ತೆಯನ್ನೇ ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಹೊಂಡದ ವೃತ್ತದ ಬಳಿ ನಡೆದಿದೆ.
ಭಾಗ್ಯಮ್ಮ (45) ಗಾಯಗೊಂಡ ಮಹಿಳೆ. ಈಕೆಯ ಅಳಿಯ ಅಭಿರಾಜ್ (21) ಆಸ್ತಿಗಾಗಿ ಮಚ್ಚಿನಿಂದ ನಡು ರಸ್ತೆಯಲ್ಲಿಯೇ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಭಾಗ್ಯಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story