ನಾಲ್ವರು ಅತೃಪ್ತ ಶಾಸಕರ ವಿರುದ್ಧ ಎಸಿಬಿ ಅಸ್ತ್ರ ?
ಬೆಂಗಳೂರು, ಜು.12: ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ನಾಲ್ವರು ಶಾಸಕರನ್ನು ಹಣಿಯಲು ಮೈತ್ರಿ ಸರಕಾರ ಎಸಿಬಿ ಅಸ್ತ್ರವನ್ನು ಪ್ರಯೋಗಿಸಲಿದೆ.
ಅತೃಪ್ತ ಶಾಸಕರಾದ ಮುನ್ನಿರತ್ನ, ಗೋಪಾಲಯ್ಯ, ಭೈರತಿ ಬಸವರಾಜ್ , ಸೋಮಶೇಖರ್ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯ ಮಂತ್ರಿ ಕಚೇರಿಯಿಂದ ಸೂಚನೆ ರವಾನೆಯಾಗಿದೆ. ಇದೇ ಕಾರಣಕ್ಕಾಗಿ ಹೇಮಂತ್ ನಿಂಬಾಲ್ಕರ್ ಅವರಿಗೆ ಎಸಿಬಿಯ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
Next Story